Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೀರಾಜಪೇಟೆಯಲ್ಲಿ ?ಬೀರನ ಹಾಡು
Posted date: 23 Mon, Jul 2012 ? 12:08:24 PM
  ಎ ಎಂಡ್ ಎ ಕ್ರಿಯೇಷನ್ಸ್ ಲಾಂಛನದಲ್ಲಿ ಅಯೂಬ್ ಪಾರ್ಥನಳ್ಳಿ ನಿರ್ಮಿಸುತ್ತಿರುವ ‘ಬೀರ ಚಿತ್ರಕ್ಕಾಗಿ ಸಂಜಯ್ ಅವರು ಬರೆದಿರುವ ‘ಈ ಕಾವೇರಿತೀರದಲ್ಲಿ ಮುಂಜಾನೆ ಹೊತ್ತಲ್ಲಿ ಹನಿಮಂಜಲಿ ರವಿ ಮೂಡಿಬಂತು ನನಗೆ ನಿನ್ನ ನೋಡೋ ಬಲು ಆಸೆ ಬಂತು ಎಂಬ ಹಾಡಿನ ಚಿತ್ರೀಕರಣ ವಿರಾಜಪೇಟೆಯ ಪ್ರಸಿದ್ದ ಜಲಪಾತವೊಂದರ ಬಳಿ ನಡೆಯಿತು. ಮದನ್ ಹರಿಣಿ ನೃತ್ಯ ಸಂಯೋಜಿಸಿದ ಈ ಹಾಡಿಗೆ ಸರ್ದಾರ್ ಸತ್ಯ, ರೂಪಿಕಾ, ಕಾಶಿ, ರಾಜು ತಾಳಿಕೋಟೆ ಮುಂತಾದವರು ಭಾಗವಹಿಸಿದ್ದರು.
     ಸಂಜಯ್ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದೇವರಾಜ್ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ಸಂಜಯ್ ಹಾಗೂ ನಾಗೇಂದ್ರಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ. ಮನ್ಸೂರ್‌ಅಹ್ಮದ್ ಸಂಗೀತ ನೀಡಿರುವ ‘ಬೀರನಿಗೆ ಬಾಲಗಣೇಶನ್ ಅವರ ಛಾಯಾಗ್ರಹಣವಿದೆ. ಗಿರೀಶ್‌ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹರ್ಷರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸತ್ಯ, ಶುಭಾಪುಂಜಾ, ರೂಪಿಕಾ, ಸಾಧುಕೋಕಿಲಾ, ಸತ್ಯಜಿತ್, ಶುಚೀಂದ್ರಪ್ರಸಾದ್, ರಾಮಪ್ರಸಾದ್  ಮುಂತಾದವರಿದ್ದಾರೆ. ನಿರ್ಮಾಪಕ ಅಯೂಬ್ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೀರಾಜಪೇಟೆಯಲ್ಲಿ ?ಬೀರನ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.